ರಿಪ್ಪನ್ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿರುವ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ರಿಪ್ಪನ್ಪೇಟೆ ಶಾಖೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಶಾಖಾ ವ್ಯವಸ್ಥಾಪಕ ಆರ್.ಪ್ರತಾಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಹಕಾರ ಎಂದರೆ ಕೇವಲ ವ್ಯವಹಾರವಲ್ಲ ಅದು ಜನರ ಸೇವೆ ಎಂಬ ಸಂಘದ ಮೂಲ ಮಂತ್ರವನ್ನು ಮತ್ತೊಮ್ಮೆ ಒತ್ತಿ ಹೇಳಿದ ಅವರು, ಇಂದಿನ ಸ್ವಾತಂತ್ರ್ಯ ದಿನದಂದು ದೇಶಕ್ಕಾಗಿ ಮತ್ತು ಸಹಕಾರಿಗಾಗಿ ಪ್ರಾಮಾಣಿಕವಾಗಿ ನಿಷ್ಟೆಯಿಂದ ದುಡಿಯುವ ಪ್ರತಿಜ್ಞೆಯನ್ನು ಎಲ್ಲರೂ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಶಾಖೆಯ ಸಿಬ್ಬಂದಿವರ್ಗ ಮತ್ತು ಇನ್ನಿತರರು ಪಾಲ್ಗೊಂಡಿದ್ದರು.







