ಹೊಸನಗರ ; ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಬಿ.ಗೋವಿಂದಪ್ಪ ನಿಧನ !

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: ತಾಲ್ಲೂಕಿನಲ್ಲಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಜನಪರ ಕೆಲಸ ಮಾಡಿರುವ ಕೋಟೆಗಾರ್ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ಹಾಲಿ ಗೌರವಾಧ್ಯಕ್ಷ ಬಿ ಗೋವಿಂದಪ್ಪ (85) ಮಣಿಪಾಲ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ಭಾನುವಾರ ರಾತ್ರಿ 11:30ಕ್ಕೆ ನಿಧನರಾದರು.

ಅವರ ಪಾರ್ಥಿವ ಶರೀರವನ್ನು ಸೋಮವಾರ ಬೆಳಿಗ್ಗೆ 7ಗಂಟೆಯಿಂದ ಅವರ ಕೋರ್ಟ್ ಸರ್ಕಲ್‌ನಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಅವರ ತೋಟದಲ್ಲಿ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಲಾಯಿತು.

ಇವರು ಮಗಳು ವಾಸಂತಿ ರಾಜೇಂದ್ರ ಕೊತ್ವಾಲ್ ಮೊಮ್ಮಕ್ಕಳು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಅವರು ಹೊಸನಗರ ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದು ಗಾಯತ್ರಿ ಬಸ್ ಮಾಲೀಕರು ಹಾಗೂ ಶ್ಯಾಮ್ ಸುಂದರ್ ಲಾರಿ ಮಾಲೀಕರಾಗಿದ್ದು ಇವರ ನಿಧನದಿಂದ ಎಲ್ಲ ಜಾತಿ-ಪಂಥದವರಿಗೂ ನಷ್ಟ ಉಂಟಾಗಿದೆ.

ಸಂತಾಪ:
ಇವರ ನಿಧನಕ್ಕೆ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಶಿಧರ್‌ನಾಯ್ಕ್ ಹಾಗೂ ಸಂಘದ ಪದಾಧಿಕಾರಿ ಸದಸ್ಯರುಗಳು, ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಕಲಗೋಡು ರತ್ನಾಕರ್, ಎನ್.ಆರ್ ದೇವಾನಂದ್, ಶ್ರೀಪತಿರಾವ್, ತೀ.ನ. ಶ್ರೀನಿವಾಸ್, ಮೋಹನ್ ಶೆಣೈ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ|| ರಾಮಚಂದ್ರರಾವ್, ಶ್ರೀಧರ ಉಡುಪ, ದತ್ತಾತ್ರೇಯ ಉಡುಪ, ಮುರುಳಿಧರ, ಹಾಗೂ ಸದಸ್ಯರು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ದುಮ್ಮ ರೇವಣ್ಣಪ್ಪ ಕಾರ್ಯದರ್ಶಿ ಚನ್ನಬಸಪ್ಪ ಗೌಡ, ಜಿ.ಟಿ ಈಶ್ವರಗೌಡ, ಮಿಲ್ ಈಶ್ವರಪ್ಪ ಗೌಡ, ಪಟ್ಟಣ ಪಂಚಾಯತಿ ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಸುರೇಂದ್ರ ಹಾಗೂ ಹೊಸನಗರ ತಾಲ್ಲೂಕಿನ ಎಲ್ಲ ಸಂಘ-ಸಂಸ್ಥೆಯ ಅಧ್ಯಕ್ಷ ಸದಸ್ಯರು ವಿವಿಧ ಜಾತಿಯ ಸಂಘದ ಅಧ್ಯಕ್ಷ ಸದಸ್ಯರು ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Leave a Comment

error: Content is protected !!