ಹೊಸನಗರ : 2024-25ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ (Kuvempu University) ಪುರುಷರ ಅಂತರ್ ವಿಶ್ವವಿದ್ಯಾಲಯದ ಬಾಲ್ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯು ಮೇ 23ರಂದು ನಡೆದಿದ್ದು ಮೇ 31 ರಿಂದ ಜೂನ್ ಮೂರರವರೆಗೆ ಚೆನ್ನೈನ ಜಪ್ಪಿಯಾರ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೊಸನಗರ (Hosanagara) ತಾಲೂಕಿನ ಗ್ರಾಮೀಣ ಪ್ರತಿಭೆಗಳಾದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಲೋಹಿತ್ ಹಾಗೂ ಸೋಮಶೇಖರ್ ಚೆನ್ನೈಗೆ ತೆರಳಲ್ಲಿದ್ದು ಅವರಿಗೆ ಕಾಲೇಜಿನ ಪ್ರಾಚಾರ್ಯ ಡಾ. ಕೆ ಉಮೇಶ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು ಕಾಲೇಜಿನ ಕೀರ್ತಿಗೆ ಭಾಜನರಾದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಆರ್. ಲೋಹಿತ್ ಹೊಸನಗರ ತಾಲೂಕು ವಾರಂಬಳ್ಳಿ ಗ್ರಾಮದ ರೊಕ್ಕಪ್ಪ ಹಾಗೂ ಲೀಲಾವತಿಯವರ ಪುತ್ರನಾಗಿದ್ದು, ಸೋಮಶೇಖರ ಅದೇ ಗ್ರಾಮದ ಸುರೇಶ್ ಹಾಗೂ ನೀಲಾವತಿಯವರ ಪುತ್ರನಾಗಿರುತ್ತಾನೆ.