ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ !

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಪುರದಾಳು ಗ್ರಾಮ ಪಂಚಾಯಿತಿ ಆಲದೇವರ ಹೊಸೂರಿನಲ್ಲಿ ನಡೆದಿದೆ.

ಹನುಮಂತ (50) ಸಾವನ್ನಪ್ಪಿದ ಕಾರ್ಮಿಕ. ಶನಿವಾರ ಸಂಜೆ 6.30 ರ ಸಮಯದಲ್ಲಿ ಜಮೀನು ಕೆಲಸ ಮುಗಿಸಿ ಪುರದಾಳು ಗ್ರಾಮದಿಂದ ಆಲದೇವರ ಹೊಸೂರಿಗೆ ಬರುತ್ತಿದ್ದ ಹನುಮಂತ ಅವರಿಗೆ ಆನೆ ಎದುರಾಗಿದೆ. ತಕ್ಷಣ ಬೆನ್ನತ್ತಿದ ಆನೆ ಕ್ಷಣಮಾತ್ರದಲ್ಲೇ ತುಳಿದು ಸಾಯಿಸಿದೆ.

ಹನುಮಂತಪ್ಪ ಅವರು ಸಂಪತ್‌ ಕುಮಾರ್‌ ಎಂಬುವವರ ತೋಟದ ಮನೆಯಲ್ಲಿ ವಾಸವಾಗಿದ್ದರು. ಆಶ್ಫಾಕ್‌ ಅಹಮದ್‌ ಖಾನ್‌ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಹನುಂತಪ್ಪಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ.

Leave a Comment

error: Content is protected !!