ಹೊಸನಗರ : ಪಟ್ಟಣದ ನೆಹರು ರಸ್ತೆಯ ನಿವಾಸಿ ಬಟ್ಟೆ ಅಂಗಡಿ ಮಾಲೀಕರಾದ ಸುಂದರ್ರಾವ್ರವರ ಧರ್ಮಪತ್ನಿ ಲೀಲಾವತಿ (78) ಅನಾರೋಗ್ಯದ ಕಾರಣ ತಮ್ಮ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾದರು.
ಮೃತರು ವಿ.ಆರ್.ಎಲ್ ಕೊರಿಯರ್ ನಡೆಸುತ್ತಿರುವ ಶಿವಶಂಕರ್ ಬೇಂದ್ರೆ ಸೇರಿದಂತೆ ಓರ್ವ ಪುತ್ರ, ಪುತ್ರಿ ಮತ್ತು ಮೊಮ್ಮಕ್ಕಳು, ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.
ಸಂತಾಪ:
ಇವರ ನಿಧನಕ್ಕೆ ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್.ಸುಧಾಕರ್, ಪತ್ರಕರ್ತ ಶ್ರೀಕಂಠ ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.