ಹೊಸನಗರ ತಾಲೂಕು ಜೆಡಿಎಸ್ ಮುಖಂಡ ಎಂ. ವಾಸುದೇವಾಚಾರ್ ಇನ್ನಿಲ್ಲ !

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ : ತಾಲೂಕು ವಿಶ್ವಕರ್ಮ ಸಮಾಜದ ಮುಖಂಡರು, ತಾಲೂಕು ಜೆಡಿಎಸ್ (JDS) ಮಾಜಿ ಅಧ್ಯಕ್ಷರಾಗಿ, ಪುರಸಭೆ ಮಾಜಿ ಸದಸ್ಯರಾಗಿ, ಸಾಗರ ಆಪ್ಸ್ಕೋಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪಟ್ಟಣದ ಹಳೆ ಸಾಗರ ರಸ್ತೆಯ ನಿವಾಸಿಯಾಗಿದ್ದ ಎಂ. ವಾಸುದೇವಾಚಾರ್ (86) ಇಂದು ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.

ಮೃತರು ವಿವಿಧ ಧಾರ್ಮಿಕ ಹಾಗೂ ಸಮಾಜ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು – ಬಳಗ ಅಗಲಿದ್ದಾರೆ.

ತಾಲೂಕು ಜೆಡಿಎಸ್ ಅಧ್ಯಕ್ಷ ರಿಪ್ಪನ್‌ಪೇಟೆ ವರ್ತೇಶ್, ಜೆಡಿಎಸ್ ಮಾಜಿ ಅಧ್ಯಕ್ಷ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎ. ಜಯರಾಮ್ ಹಾಗೂ ಇನ್ನಿತರ ಸಮಾಜದ ಮುಖಂಡರು ಮೃತರ ನಿಧನಕ್ಕೆ ನಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More :Rain Alert | ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ,…

Leave a Comment

error: Content is protected !!