ಹೊಸನಗರ ಕೆಇಬಿ ವೃತ್ತದಲ್ಲಿದ್ದ 75 ಅಡಿ ಎತ್ತರದ ಧ್ವಜಸ್ತಂಭ ಧ್ವಂಸಗೊಳಿಸಿ ಕಿಡಿಗೇಡಿಗಳಿಂದ ವಿಕೃತಿ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಪಟ್ಟಣದ ರಾಜ್ಯ ಹೆದ್ದಾರಿ 766 ಸಿ ಮೆಸ್ಕಾಂ ಕಛೇರಿ ಎದುರಿನಲ್ಲಿದ್ದ ಮಿತ್ರಕೂಟ ಕನ್ನಡ ಸಂಘ, ರಾಜರತ್ನ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದವರು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ 70 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಿದ್ದರು.

ಈ ಧ್ವಜಸ್ತಂಭದಲ್ಲಿ ರಾಷ್ಟ್ರೀಯ ದಿನಾಚರಣೆಗಳಲ್ಲಿ ರಾಷ್ಟ್ರಧ್ವಜ ಹಾಗೂ ಇತರೆ ದಿನಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು ಮಂಗಳವಾರ ರಾತ್ರಿ ತೀವ್ರ ವರ್ಷಧಾರೆ ನಡುವೆಯೂ ಧ್ವಜಸ್ತoಭವನ್ನು ಧ್ವಂಸಗೊಳಿಸಿರುವ ಘಟನೆ ಸಂಭವಿಸಿದೆ. ಈ ಕೃತ್ಯ ಬುಧವಾರ ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ.

ನಟ ಶಿವರಾಜ್‌ಕುಮಾರ್ ರವರು ಹೊಸನಗರಕ್ಕೆ ಆಗಮಿಸಿದಾಗ ಈ ವೃತ್ತದಲ್ಲಿ ಇಳಿದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರು, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣರ ಸಮ್ಮುಖದಲ್ಲಿ ಸಹೋದರ ಡಾ. ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದರು.

Leave a Comment

error: Content is protected !!