ಮಳಲಿ ಮಠದಲ್ಲಿ ನಾಳೆ ನಾಗರಪಂಚಮಿ | ಮೂಲೆಗದ್ದೆ ಸದಾನಂದಾಶ್ರಮದಲ್ಲಿ ಶ್ರಾವಣ ಚಿಂತನ-ಮಂಥನ ವಿಶೇಷ ಪೂಜಾ ಕಾರ್ಯಕ್ರಮ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀಮನ್ ಮಹಾಸಂಸ್ಥಾನ ಮಳಲಿಮಠದಲ್ಲಿ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಾಗರ ಪಂಚಮಿ ಅಂಗವಾಗಿ ಆಗಸ್ಟ್ 9 ರಂದು ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಈ ಪೂಜಾ ಕಾರ್ಯದಲ್ಲಿ ನಾಡಿನ ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗುರುಗಳ ದರ್ಶನಾಶೀರ್ವಾದ ಪಡೆಯುವ ತಿಳಿಸಿದ್ದಾರೆ.

ಮೂಲೆಗದ್ದೆ ಸದಾನಂದಾಶ್ರಮದಲ್ಲಿ ಶ್ರಾವಣ ಚಿಂತನ-ಮಂಥನ ವಿಶೇಷ ಪೂಜಾ ಕಾರ್ಯಕ್ರಮ

HOSANAGARA | ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜೀಯವರು ಲಿಂ. ಚನ್ನಬಸವ ಮಹಾಶಿವಯೋಗಿಗಳ ಮತ್ತು ಲಿಂ. ಸಿದ್ದಲಿಂಗ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಲೋಕಕಲ್ಯಾಣಾರ್ಥ ಕ್ಷೇತ್ರಾಭಿವೃದ್ದಿಗಾಗಿ ನಾಡಿನ ಸಕಲ ಸದ್ಭಕ್ತರ ಶ್ರಯೋಭಿವೃದ್ದಿಗಾಗಿ ಸಂಕಲ್ಪಿಸಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿಷೇಕ ಮತ್ತು ಧರ್ಮ ಜಾಗೃತಿ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಸದ್ಭಕ್ತರು ಭಾಗವಹಿಸಿ ದೇವರ ಮತ್ತು ಗುರುಗಳ ದರ್ಶನಾಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ತಿಳಿಸಿದೆ.

Leave a Comment

error: Content is protected !!