ರಿಪ್ಪನ್ಪೇಟೆ: ಭಾರಿ ಗಾಳಿ, ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಅಡಿಕೆ ತೋಟಕ್ಕೆ ಹಾನಿ ಉಂಟಾದ ಘಟನೆ ಹುಂಚ ಹೋಬಳಿಯ ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
Rain Damage
ಗೋಪಮ್ಮ ಕೋಂ ಹೂವಣ್ಣ ಎಂಬುವವರಿಗೆ ಸೇರಿದ ಸ.ನಂ 10ರ 3.12 ಎಕರೆ ವಿಸ್ತೀರ್ಣದ ಅಡಿಕೆ ತೋಟದ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಈ ಘಟನೆಯಲ್ಲಿ 50ಕ್ಕೂ ಅಧಿಕ ಫಸಲು ಬರುವ ಅಡಿಕೆ ಮರಗಳು ಧರಾಶಾಹಿಯಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನೂ ನಿನ್ನೆ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಶಿವಮೊಗ್ಗ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು ಹಲವೆಡೆ ಮರಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದೆ.
ಕೆಲವು ದಿನಗಳಿಂದ ಕುಡಿಯುವ ನೀರಿಗೂ ಈ ಭಾಗದಲ್ಲಿ ಹಾಹಾಕಾರ ಎದುರಾಗಿತ್ತು. ವರ್ಷಧಾರೆ ಜನರಲ್ಲಿ ಸಂಭ್ರಮ ತಂದಿದೆ.
Read More
- ರಾಷ್ಟ್ರೀಯ ಡೆಂಗೀ ದಿನ – 2024 | ಸೊಳ್ಳೆ ನಿಯಂತ್ರಣದಿಂದ ಡೆಂಗೀ ರೋಗ ತಡೆಗಟ್ಟೋಣ ; ಸ್ನೇಹಲ್ ಸುಧಾಕರ ಲೋಖಂಡೆ ಕರೆ
- ಧರ್ಮ ಜಾಗೃತಿಗಾಗಿ ‘ಶ್ರೀಶೈಲ ಜಗದ್ಗುರುಗಳ ನಡಿಗೆ ಮಲೆನಾಡ ಕಡೆಗೆ’ ಉತ್ತಮ ಸ್ಪಂದನೆ
- ಕೊಟ್ಟಿಗೆಯಲ್ಲಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ
- ಮೈಲುತುತ್ತ, ರಸಗೊಬ್ಬರ ಅನಧಿಕೃತ ಮಾರಾಟಗಾರರ ವಿರುದ್ಧ ಕ್ರಮ ; ಸಚಿನ್ ಹೆಗಡೆ
- ಅಡಿಕೆ ಗೊನೆಗೆ ಔಷಧಿ ಸಿಂಪಡಿಸುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು !