ಪಾಳುಬಿದ್ದ ಮನೆ, ಜೀವಭಯದಲ್ಲಿ ಅಕ್ಕ-ಪಕ್ಕದ ನಿವಾಸಿಗಳು !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ರಾಜ್ಯ ಹೆದ್ದಾರಿ ಶಿವಮೊಗ್ಗ-ಹೊಸನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮನೆಯೊಂದು ಹಲವು ವರ್ಷಗಳಿಂದ ಪಾಳುಬಿದ್ದಿದ್ದು ಇದು ಯಾವುದೇ ಕ್ಷಣದಲ್ಲಾದರೂ ಉರುಳಿ ಬೀಳುವ ಸ್ಥಿತಿ ಇದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುವಂತಾಗಿದೆ.

ಸತೀಶ್ ಕಿಣಿ ಮತ್ತು ಆರ್.ಎಸ್.ಶಂಶುದ್ದೀನ್ ಎಂಬುವರ ಅಕ್ಕ-ಪಕ್ಕದ ನಿವಾಸಿಗಳಾಗಿದ್ದು ಸಣ್ಣ-ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಾಳುಬಿದ್ದ ಮನೆಯ ಗೋಡೆಗಳು ಯಾವುದೇ ಸಂದರ್ಭದಲ್ಲಿ ಬೀಳುವ ಆತಂಕ ಎದುರಾಗಿದೆ. ಇದು ಇಲ್ಲಿನ‌ ನಿವಾಸಿಗಳಿಗೆ ಕಾಡತೊಡಗಿದೆ.

ಇನ್ನಾದರೂ ಸ್ಥಳೀಯಾಡಳಿತ ಸಂಬಂಧಿಸಿದ ಮನೆಯ ಮಾಲೀಕರನ್ನು ಕರೆಯಿಸಿ ತಕ್ಷಣ ಪಾಳು ಮನೆಯನ್ನು ತೆರವುಗೊಳಿಸಲು ಸೂಚಿಸಬೇಕು ಎಂದು ಸತೀಶ್ ಕಿಣಿ ಮತ್ತು ಶಂಶುದ್ದೀನ್ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಆಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.

Leave a Comment

error: Content is protected !!