HOSANAGARA | ಕಳೆದ ಒಂದೂವರೆ ತಿಂಗಳಿಂದ ನಿರ್ಬಂಧ ವಿಧಿಸಿದ್ದ ಕೊಡಚಾದ್ರಿ ಮತ್ತು ಹಿಡ್ಲುಮನೆ ಜಲಪಾತಕ್ಕೆ ಚಾರಣವನ್ನು ಮತ್ತೆ ಪುನಾರಂಭಗೊಳಿಸಿ ಮಂಗಳವಾರ ವನ್ಯಜೀವಿ ಇಲಾಖೆ ಆದೇಶ ಹೊರಡಿಸಿದೆ.
ಮಲೆನಾಡು ಭಾಗದಲ್ಲಿ ಸುರಿದ ವಿಪರೀತ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಜುಲೈ 4ರಿಂದ ಕೊಡಚಾದ್ರಿ, ಹಿಡ್ಲುಮನೆ ಜಲಪಾತ ಸೇರಿದಂತೆ ವನ್ಯಜೀವಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ಪ್ರವಾಸಿ ತಾಣಗಳಿಗೆ ಚಾರಣ ಮಾಡಲು ನಿರ್ಬಂಧ ಹೇರಲಾಗಿತ್ತು. ಮಂಗಳವಾರದಿಂದ ಇಲಾಖೆ ನಿಗದಿಪಡಿಸಿದ ಶುಲ್ಕ ಪಾವತಿಸಿ ಚಾರಣ ನಡೆಸಲು ಅನುಮತಿ ನೀಡಲಾಗಿದೆ.