RIPPONPETE | ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲೆಡೆ ಅಶಾಂತಿ ಅರಾಜಕತೆ ತುಂಬಿಕೊಂಡಿದ್ದು ಶಾಂತಿ ನೆಮ್ಮದಿಯಿಲ್ಲದಂತಾಗಿದೆ. ಶ್ರಾವಣ ಮಾಸದಲ್ಲಿ ಶುದ್ದ ಮನಸ್ಸಿನಿಂದ ಭಗವಂತನ ದ್ಯಾನಿಸಿದರೆ ಪುಣ್ಯ ಪ್ರಾಪ್ತಿಯಾಗುವುದೆಂದು ಅಕ್ಕಿಆಲೂರು ವಿರಕ್ತ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮಕ್ಕೆ ಅಕ್ಕಿಆಲೂರಿನ ಭಕ್ತರೊಂದಿಗೆ ಭೇಟಿ ನೀಡಿದ ಶ್ರೀಗಳು ಆಶೀರ್ವಚನ ನೀಡಿ ರೈತರುಗಳಾದ ನಮಗೆ ವರ್ಷವಿಡಿ ಒಂದಲ್ಲಾ ಒಂದು ಕೆಲಸದ ಒತ್ತಡದಲ್ಲಿ ಧರ್ಮ ಧಾರ್ಮಿಕ ಆಚರಣೆಗಳಿಂದ ನಾವು ದೂರ ಉಳಿಯುವಂತಾಗಿದ್ದು. ದುಡಿಮೆಯಲ್ಲಿಯೇ ಕಾಲಕಳೆಯಬೇಕಾದ ಅನಿರ್ವಾತೆ ಎದುರಾಗಿದೆ. ಆ ಕಾರಣ ನಮ್ಮ ಹಿಂದಿನವರು ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಭಗವಂತನ ನಾಮಸ್ಮರಣೆ ಮಾಡಲು ಶ್ರಾವಣ ಒಂದು ತಿಂಗಳು ಕಾಲ ಶುದ್ದ ಮನಸ್ಸಿನಿಂದ ಭಗವಂತನ ನಾಮಸ್ಮರಣೆಯೊಂದಿಗೆ ಪುರಾಣ ಪ್ರವಚನವನ್ನು ಕೇಳಿಸುವ ಕೆಲಸ ಮಾಡುವುದರೊಂದಿಗೆ ಮನಸ್ಸು ಪರಿಶುದ್ದವಾಗಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮತ್ತು ಅಕ್ಕಿಆಲೂರು ಮಠದ ಭಕ್ತ ಸಮೂಹ ಹಾಗೂ ಅಖಿಲಭಾರತ ಹೊಸನಗರ ತಾಲ್ಲೂಕು ವೀರಶೈವ ಮಹಾಸಭಾ ತಾಲ್ಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ, ರಿಪ್ಪನ್ಪೇಟೆ ಡಿ.ಈ ರವಿಭೂಷಣ, ರಮೇಶ್ ಕೆ.ಬಿ, ಪತ್ರಕರ್ತ ಕೆ.ಎಂ.ಬಸವರಾಜ ಇನ್ನಿತರರು ಹಾಜರಿದ್ದರು.