HOSANAGARA ; 10ನೇ ವಾರ್ಡ್ ನಿವಾಸಿ ಹೆಚ್.ಕೆ ಸುಬ್ಬರಾವ್ರವರು ಜನ ಸೇವೆ ಮಾಡುವುದರ ಜೊತೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಾಚ್ ಗಿಫ್ಟ್ ನೀಡುತ್ತಿದ್ದರು, ಇವರ ನಿಧನ ತುಂಬಲಾರದ ನಷ್ಟವಾಗಿದೆ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುಬ್ಬಿಗಾ ಅನಂತರಾವ್ ಹೇಳಿದರು.
ಹೆಚ್.ಕೆ ಸುಬ್ಬರಾವ್ರವರು ಇತ್ತೀಚೆಗೆ ನಿಧನರಾಗಿದ್ದು ಅವರು ಸ್ಪೋಟ್ಸ್ ಕ್ಲಬ್ ಸದಸ್ಯರಾಗಿದ್ದರು. ಇವರ ಸಂತಾಪ ಸಭೆಯನ್ನು ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಅನಂತರಾವ್ ಮಾತನಾಡಿದರು.
ಸುಬ್ಬರಾವ್ರವರು ಜನ ಸೇವೆ ಮಾಡುತ್ತಾ ಬರುತ್ತಿದ್ದು ಅನಾರೋಗ್ಯದಿಂದ ಜನ ಸೇವೆ ಮಾಡುವುದನ್ನು ನಿಲ್ಲಿಸಿದರು. ಇವರು ಯುವಕರಾಗಿದ್ದಾಗ ಕಲೆ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಟಿಪ್ಪು ಸುಲ್ತಾನ್ ಪತ್ರದ ಮೂಲಕ ಜನ ಮನ್ನಡೆ ಪಡೆದಿದ್ದರು ಎಂದರು.
ಈ ಸಂತಾಪ ಸಭೆಯಲ್ಲಿ ಸ್ಪೋಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಪರಮೇಶ್ವರ ರಾವ್, ಕಾರ್ಯದರ್ಶಿ ನಿವೃತ್ತ ಬ್ಯಾಂಕ್ ಸಿಬ್ಬಂದಿ ಬಿ.ಎಂ ಶ್ರೀಧರ, ಉಪಾಧ್ಯಕ್ಷರಾದ ಪ್ರಭಾಕರ್, ಉಮೇಶ್ ಕಂಚುಗಾರ್, ಖಜಾಂಚಿ ಎಂ.ಪಿ.ಸುರೇಶ್, ಬಿ.ಎಸ್. ಸುರೇಶ್, ಕಟ್ಟೆ ಸುರೇಶ, ಕೃಷ್ಣಮೂರ್ತಿ ಹಾಗೂ ಎಲ್ಲ ನಿರ್ದೆಶಕ ಸದಸ್ಯರುಗಳು ಉಪಸ್ಥಿತರಿದ್ದರು.