ಹೊಸನಗರ: ಪಟ್ಟಣದ ಗಣಪತಿ, ಪಾರ್ವತಿ, ಮಹೇಶ್ವರ ದೇವಸ್ಥಾನದ ಅರ್ಚಕರಾಗಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ವಿಶ್ವನಾಥಭಟ್ (67) ಅನಾರೋಗ್ಯದ ಕಾರಣ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರು ಸುಮಾರು 50 ವರ್ಷಗಳ ಕಾಲ ಗಣಪತಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದು, ಮೃತರು ಪತ್ನಿ ಹಾಗೂ ಸಹೋದರಾದ ವೇಣುಗೋಪಾಲ್ ಭಟ್, ಕೃಷ್ಣಮೂರ್ತಿ ಭಟ್ ಹಾಗೂ ಅಪಾರ ಬಂಧು – ಬಳಗದವರನ್ನು ಬಿಟ್ಟು ಅಗಲಿದ್ದಾರೆ.
ಸಂತಾಪ:
ಇವರ ನಿಧನಕ್ಕೆ ದೇವಸ್ಥಾನ ಕಮಿಟಿಯ ಶ್ರೀನಿವಾಸ್ ಕಾಮತ್, ದ್ಯಾವರ್ಸ ಬಾಬುರಾವ್ (ಸುಬ್ರಹ್ಮಣ್ಯ) ವಿಷ್ಣುಮೂರ್ತಿ, ಶ್ರೀಕಂಠ ಹಾಗೂ ಅಪಾರ ಬಂಧು-ಬಳಗದವರು ಗಣ್ಯರು ಆಗಮಿಸಿ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.