ಹೊಸನಗರ: ಬೇರೆ-ಬೇರೆ ತಾಲ್ಲೂಕು, ಜಿಲ್ಲೆಗಳಲ್ಲಿ ಚುನಾವಣೆ (Election) ಕರ್ತವ್ಯಕ್ಕೆ ತೆರಳಿ ವಾಪಾಸ್ ಬರುತ್ತಿದ್ದಂತೆ ಹೊಸನಗರ (Hosanagara)ದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ, ಕಲ್ಲು ಗಣಿಗಾರಿಕೆ ದಂಧೆಗೆ ಬ್ರೇಕ್ ಹಾಕುವ ಸಲುವಾಗಿ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ರಾಜರೆಡ್ಡಿಯವರ ನೇತೃತ್ವದ ಪೊಲೀಸರ (Police) ತಂಡ ತಾಲ್ಲೂಕಿನ ಮಳಲಿ, ಬಾಳೆಕೊಪ್ಪ, ಮುಳುಗುಡ್ಡೆ, ಎಡಚಿಟ್ಟೆ ಗ್ರಾಮಗಳಲ್ಲಿ ರಾತ್ರಿ ಇಡೀ ಸುತ್ತುವರೆದು ಅಕ್ರಮವಾಗಿ ಮರಳು ತುಂಬಿದ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಪಿಕಾಪ್ ವಾಹನ ಹಾಗೂ ಅಕ್ರಮವಾಗಿ ಕಲ್ಲುಕಂಬ ತುಂಬಿದ್ದ ವ್ಯಾನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಸುನೀಲ್, ಗಂಗಪ್ಪ, ಅವಿನಾಶ್ ಇನ್ನೂ ಮುಂತಾದವರು ಭಾಗವಹಿಸಿದ್ದರು.