ಶ್ರದ್ಧಾ ಭಕ್ತಿಯಿಂದ ವೈಭವದೊಂದಿಗೆ ಮುತ್ತೈದೆಯರಿಂದ ಗೌರಮ್ಮನ ಪ್ರತಿಷ್ಠಾಪನಾ ಪೂಜೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE ; ಗೌರಿ ಹಬ್ಬದ ಅಂಗವಾಗಿ ಇಂದು ರಿಪ್ಪನ್‌ಪೇಟೆಯ ವಿನಾಯಕ ದೇವಸ್ಥಾನದಲ್ಲಿ ಶ್ರದ್ದಾಭಕ್ತಿಯಿಂದ  ವೈಭದೊಂದಿಗೆ ಮುತ್ತೈದೆಯರಿಂದ ಗೌರಮ್ಮನ ಪ್ರತಿಷ್ಠಾಪನಾ ಪೂಜೆ ಸಡಗರದೊಂದಿಗೆ ನೆರವೇರಿತು.

ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರದಂದು ಮಂಗಳಗೌರಿ ಪೂಜೆಯನ್ನು ಮನೆಮನೆಯಲ್ಲಿ ಆಚರಿಸುವುದು ವಿಶೇಷ. ಆದರೆ ಇಲ್ಲಿನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೌರಿ ಹಬ್ಬದ ಅಂಗವಾಗಿ ಗೌರಮ್ಮನನ್ನು ಶ್ರದ್ದಾಭಕ್ತಿಯಿಂದ ಮೆರವಣಿಗೆಯಲ್ಲಿ ತಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರಶೇಖರಭಟ್ ಮತ್ತು ಗುರುರಾಜ ಭಟ್ ಇವರ ನೇತೃತ್ವದಲ್ಲಿ ಪ್ರತಿಷ್ಟಾಪನಾ ಪೂಜಾ ಕೈಂಕರ್ಯವು ಜರುಗಿತು.

ನಂತರ ಬಂದಂತಹ ಮಹಿಳೆಯರಿಗೆ ಹಿಂದೂ ಸಂಪ್ರದಾಯದಂತೆ ಮುತ್ತೈದೆಯರು ಅರಿಶಿಣ, ಕುಂಕುಮ ನೀಡಿ ಉಡಿ ತುಂಬಿ ಶುಭಹಾರೈಸುತ್ತಿದ್ದು ವಿಶೇಷವಾಗಿತು.

ಈ ಪೂಜಾ ಕಾರ್ಯದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರಶರಟ್ಟಿ, ಎಂ.ಡಿ.ಇಂದ್ರಮ್ಮ ಭೀಮರಾಜ್‌ಗೌಡ, ನಾಗರತ್ನ ದೇವರಾಜ್, ಜಯಲಕ್ಷ್ಮಿ ಮೋಹನ್, ಆರ್.ರಾಘವೇಂದ್ರ, ಮೋಹನ್, ಸರಸ್ವತಿ ರಾಘವೇಂದ್ರ, ವೇದಾಕ್ಷಿ ಜಗದೀಶ್, ಮಂಜುಳಾ ಕೇತಾರ್ಜಿರಾವ್, ಆರ್.ಈ.ಭಾಸ್ಕರ್, ಕೋಮಲ ಕೇಶವ, ಇನ್ನಿತರರು ಉಪಸ್ಥಿತರಿದ್ದರು. 

Leave a Comment

error: Content is protected !!