HOSANAGARA | ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರಿನಲ್ಲಿರುವ ತಾಲ್ಲೂಕು ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಬೆಳಗ್ಗೆ 9 ಗಂಟೆಯಾದರೂ 78ನೇ ಧ್ವಜಾರೋಹಣ ಭಾಗ್ಯ ಕಂಡಿಲ್ಲದಿರುವುದು ದುರದುಷ್ಟಕರ ಸಂಗತಿಯಾಗಿದೆ.
ತಾಲ್ಲೂಕು ಕೇಂದ್ರ ಪಶು ವೈದ್ಯ ಕಛೇರಿಯಲಿರುವ ಎಲ್ಲ ನೌಕರರು ಹೊರ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದು ಸಹಾಯಕ ನಿರ್ದೇಶಕ ಪಶುವೈದ್ಯಾಧಿಕಾರಿ ನಟರಾಜ್ರವರಿಗೆ ಎರಡು ಆಸ್ಪತ್ರೆಯಲ್ಲಿ ಸಹಾಯಕ ಪಶು ನಿರ್ದೇಶಕ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಧ್ವಜಾರೋಹಣ ಕಾರ್ಯಕ್ರಮ ತಡವಾಗಿದೆ ಎಂದು ಹೇಳಲಾಗಿದೆ.
ಪಟ್ಟಣದ ಎಲ್ಲ ಸರ್ಕಾರಿ ಕಛೇರಿಯಲ್ಲಿಯೂ 9 ಗಂಟೆ ಒಳಗೆ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿಕೊಂಡು ನೆಹರು ಮೈದಾನಕ್ಕೆ ಆಗಮಿಸಿ ತಾಲ್ಲೂಕು ಆಡಳಿತ ನಡೆಸುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಾಡಿಕೆಯಾಗಿದೆ. ಆದರೆ 9 ಗಂಟೆಯಾದರು ಈ ಆಸ್ಪತ್ರೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯದಿರುವುದು ತಾಲ್ಲೂಕಿಗೆ ಕಳಂಕವಾಗಿದೆ.
9 ಗಂಟೆಯ ನಂತರ ಧ್ವಜಾರೋಹಣ ಕಾರ್ಯಕ್ರಮವನ್ನು ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ನಟರಾಜ್ ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದರು. ತಡವಾಗಿರುವುದರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದಂತಾಗಿದ್ದು ಮುಂದಿನ ಬಾರಿಯಾದರೂ ಬೇಗ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆಯೋ ಕಾದು ನೋಡಬೇಕಾಗಿದೆ.