ಮೋದಿ ಪ್ರಮಾಣವಚನ, ರಿಪ್ಪನ್‌ಪೇಟೆಯಲ್ಲಿ ವಿಜಯೋತ್ಸವ

Written by Malnadtimes.in

Published on:

WhatsApp Group Join Now
Telegram Group Join Now

Ripponpet | ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಭಾನುವಾರ ಮೂರನೇ ಬಾರಿಗೆ ಆಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್ ನೇತೃತ್ವದಲ್ಲಿ ಕಾರ್ಯಕರ್ತರ ಸಮೂಹ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನಂತರ ವಿನಾಯಕ ವೃತ್ತದಲ್ಲಿ ಮೋದಿ ಸಂಪುಟದಲ್ಲಿ ಮೈತ್ರಿ ಕೂಟದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಿರ್ಮಲಸೀತರಾಮ್, ಪ್ರಹ್ಲಾದ್‌ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಜಯಘೋಷಣೆ ಮುಗಿಲು ಮುಟ್ಟುವಂತೆ
ಮಾಡಿತು.

ಪಟಾಕಿಗಳ ಸದ್ದು ಜಯಘೋಷಣೆಯೊಂದಿಗೆ ಆಭಿಮಾನಗಳು ಸಿಹಿ ಹಂಚಿ ಸಂಭ್ರಮಿಸಿದ್ದು ಸಾರ್ವಜನಿಕರನ್ನು ಆಕರ್ಷಿಸುವಂತೆ ಮಾಡಿತು.

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಪಕ್ಷದ ಮುಖಂಡರಾದ ಎಂ.ಬಿ.ಮಂಜುನಾಥ, ಲೀಲಾ ಉಮಾಶಂಕರ್, ಎಂ.ಸುರೇಶ್‌ಸಿಂಗ್, ನೆವಟೂರು ದೇವೇಂದ್ರಪ್ಪಗೌಡ, ಪದ್ಮಸುರೇಶ್, ನಾಗರತ್ನ ದೇವರಾಜ್, ರೇಖಾರವಿ, ತರಕಾರಿ ಯೋಗೇಂದ್ರಗೌಡ, ಲಕ್ಷ್ಮಿ ಶ್ರೀನಿವಾಸ್, ವೇದಾವತಿ, ಅಶ್ವಿನಿ ರವಿಕುಮಾರ್, ಮುರುಳಿಧರ ಕೆರೆಹಳ್ಳಿ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಎನ್.ವರ್ತೇಶ್, ಸೂರ್ಯ ಗವಟೂರು, ಜಿ.ಡಿ.ಮಲ್ಲಿಕಾರ್ಜುನ, ಇನ್ನಿತರರು ಹಾಜರಿದ್ದರು.

Leave a Comment

error: Content is protected !!