ಮೇ 19 ರಂದು ಹೊಸನಗರ ತಾಲೂಕು ಕುಂಬಾರರ 17ನೇ ವಾರ್ಷಿಕ ಮಹಾಸಭೆ

Written by Malnadtimes.in

Updated on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ : ಹೊಸನಗರ ತಾಲೂಕು ಕುಂಬಾರರ 17ನೇ ವಾರ್ಷಿಕ ಮಹಾಸಭೆಯು ಮೇ 19ರ ಭಾನುವಾರ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಶಂಕ್ರಪ್ಪ ಎಂಬುವರ ಮನೆಯ ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಕುಂಬಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Read More:ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆ ಕಾಲೇಜಿಗೆ ಚಾಂಪಿಯನ್‌ಶಿಪ್

ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಲಿದ್ದಾರೆ‌. ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಉಪಸ್ಥಿತರಿರುವ‌ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುಂಬಾರರ ಸಂಘದ ಉಪಾಧ್ಯಕ್ಷ ಹಾಗೂ ಕೋಡೂರು ಗ್ರಾಪಂ ಸದಸ್ಯ ಶೇಖರಪ್ಪ ಎಲ್ ವಹಿಸಲಿದ್ದಾರೆ‌.

ಮುಖ್ಯ ಅತಿಥಿಗಳಾಗಿ ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ಎನ್.ಪಿ. ರಾಜು, ಕೋಡೂರು ಗ್ರಾಪಂ ಅಧ್ಯಕ್ಷ ಕೆ.ವೈ. ಉಮೇಶ್, ಕೋಡೂರು ಹಾಗೂ ಚಿಕ್ಕಜೇನಿ ಗ್ರಾಪಂ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ನಗರ ಸಿ.ಆರ್.ಪಿ ರವಿ ಕೊಳಗಿ ಉಪನ್ಯಾಸ ನೀಡಲಿದ್ದಾರೆ‌‌. ಇನ್ನೂ 2022-23ನೇ ಸಾಲಿನಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇ. 75 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ.

ಸಮಾಜದ ಹಿರಿಯರಾದ ಚೌಡಶೆಟ್ಟಿ ಹೊಸಕೋಟೆ ಹಾಗೂ ಭದ್ರಮ್ಮ ಗೌಡಕೊಪ್ಪ ಇವರಿಗೆ ಗೌರವ ಸಮರ್ಪಣೆ ಮತ್ತು ತಾಲೂಕು ಕುಂಬಾರರ ಸಂಘದ ಅಧ್ಯಕ್ಷರಾದ ಸಳ್ಳಿ ಪುಟ್ಟಸ್ವಾಮಿರವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.

Read More:ಆಯನೂರು ಮಂಜುನಾಥ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ ; ಬೇಳೂರು ಗೋಪಾಲಕೃಷ್ಣ

Leave a Comment

error: Content is protected !!