ಪತ್ರಕರ್ತ ರವಿರಾಜ್ ಭಟ್‌ಗೆ ಪಿತೃ ವಿಯೋಗ !

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ವಿಜಯ ಕರ್ನಾಟಕ ದಿನಪತ್ರಿಕೆಯ ಹೊಸನಗರ ತಾಲೂಕು ವರದಿಗಾರರಾದ ರವಿರಾಜ್ ಎಂ.ಜಿ. ಭಟ್ ರವರ ತಂದೆ ಮಾರುತಿಪುರ ಗ್ರಾಮದ ವಾಸಿ ಕೃಷಿಕರೂ, ಹೆಸರಾಂತ ಪುರೋಹಿತರಾದ ಗಣೇಶ್ ಭಟ್ (90) ಇಂದು ಬೆಳಗಿನಜಾವ 3 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಸೌಮ್ಯ ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಗಣೇಶ್ ಭಟ್ ಪ್ರತಿಫಲಾಕಾಂಕ್ಷೆ ಇಲ್ಲದೆ ಜನ ಸೇವೆಯೇ ಜನಾರ್ದನ ಸೇವೆ ಎಂಬ ಸಿದ್ದಾಂತದಲ್ಲಿ ಜೀವನ ಸಾಗಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಪುತ್ರ ವಿಜಯ ಕರ್ನಾಟಕದ ವರದಿಗಾರರಾದ ರವಿರಾಜ್ ಭಟ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ :

ಗಣೇಶ್ ಭಟ್ ನಿಧನಕ್ಕೆ ಹೊಸನಗರ ತಾಲೂಕು ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದೆ‌.

Leave a Comment

error: Content is protected !!