HOSANAGARA | ದುಮ್ಮ ಡಾ. ರೇವಣ್ಣಪ್ಪ ಗೌಡರವರಿಗೆ ಆಧ್ಯಾತ್ಮ ಮತ್ತು ಸಾಮಾಜಿಕ ಸೇವೆಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿಯ ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್ – 2024 ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳ ಭಾವೈಕ್ಯ ಸಮ್ಮೇಳನವು ವಿಶ್ವ ಕಾಲಜ್ಞಾನ ಶಿವಯೋಗಿಗಳು ಕಾಲಜ್ಞಾನ ಬ್ರಹ್ಮ ಸದ್ಗರು ಡಾ. ಶ್ರೀ ಶರಣಬಸವ ಮಹಾ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ವಿಜಯಪುರ ಜಿಲ್ಲೆಯ ಹೊಸಪೇಟೆಯ ಕಮಲಾಪುರದ ರೈತ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ. ರೇವಣಪ್ಪ ಗೌಡರವರು ಸುಮಾರು 50 ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು ಇವರ ಸಮಾಜ ಸೇವೆ ಹಾಗೂ ಧಾರ್ಮಿಕ ಸೇವೆಯನ್ನು ಮನಗಂಡು ಸಂಸ್ಥೆ ಸಿದ್ಧಗಂಗಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರಿಗೆ ಈಗಾಗಲೇ ಡಾಕ್ಟರೇಟ್ ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ, ಸಾಮಾಜಿಕ ಸೇವಾ ಪ್ರಶಸ್ತಿಗಳು ಲಭಿಸಿದ್ದು ಒಟ್ಟು ನಾಲ್ಕು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾರೆ.
ಸದ್ಗುರು ಕಾಲಜ್ಞಾನ ಶಿವಯೋಗಿ ಡಾ. ಶರಣ ಬಸವ ಮಹಾಸ್ವಾಮಿ, ಮುಂಡರಗಿ ವೀರೇಶ್ವರ ಮಹಾಸ್ವಾಮಿ, ಶ್ರೀ ಸಿದ್ಧರೂಢ ಶಿಯೋಗಾಶ್ರಮದ ಶ್ರೀ ಸಿದ್ದರಾಮ ಶಿವಯೋಗಿ, ಮೂದೋಳ ಶ್ರೀಕೈಲಾಸ ಪತಿ ಮಹಾಸ್ವಾಮಿಗಳು, ಶ್ರೀ ರೇವಣ ಸಿದ್ದೇಶ್ವರ ತಾತನವರು, ಶ್ರೀ ಕಾಳಪ್ಪ ತಾತನವರು, ಶ್ರೀ ಪ್ರಭುದೇವ ಮಹಾಸ್ವಿಮಿ, ಕಲ್ಮಾಟ, ಡಾ. ಸದ್ಗುರು ಸಬ್ಬಾಸಲಿ ತಾತನವರು, ಶ್ರೀ ದೇನಾಭಗತ್ ಗುರೂಜಿ, ಡಾ. ಎಂ.ಬಿ ಅನಂತಮೂರ್ತಿ ಇವರ ನೇತೃತ್ವದಲ್ಲಿ ದುಮ್ಮ ರೇವಣ್ಣಪ್ಪ ಗೌಡರಿಗೆ ಸನ್ಮಾನಿಸಲಾಯಿತು.