ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ಶಸ್ತ್ರಚಿಕಿತ್ಸೆಗೆ ಧನ ಸಹಾಯಕ್ಕೆ ಮನವಿ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ : ತಾಲೂಕಿನ ನಾಗೋಡಿ (ನಿಟ್ಟೂರು) ಗ್ರಾಪಂ ವ್ಯಾಪ್ತಿಯ ಬಗ್ಗಿಜೆಡ್ಡು ನಿವಾಸಿ ಬಿ.ಬಿ.ಗಾಯತ್ರಿ ಎಂಬುವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ದಾನಿಗಳಿಂದ ಧನ ಸಹಾಯ ಕೋರಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರ ಕುಟುಂಬ, ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದ್ದು, ಚಿಕಿತ್ಸೆಗೆ ಸುಮಾರು 6 ಲಕ್ಷ ರೂ. ಹಣದ ಅವಶ್ಯಕತೆ ಇದೆ. ಇವರ ಪತಿ ಅಶೋಕ್ ಒಬ್ಬರೇ ಕೂಲಿ ಮಾಡಿ ತಂದ ಹಣದಲ್ಲಿ ಜೀವನ ನಡೆಯಬೇಕಿದೆ. ಇವರ 8 ವರ್ಷದ ಪುತ್ರನಿಗೆ ದೃಷ್ಟಿದೋಷವಿದ್ದು, ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. 2 ವರ್ಷದ ಪುತ್ರಿಗೂ ಸಹ ಹೃದಯ ಸಂಬಂಧಿ ಕಾಯಿಲೆ ಇದ್ದು, ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ.

ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಗಾಯತ್ರಿ ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆ ವೆಚ್ಚಕ್ಕಾಗಿ ದಾನಿಗಳಿಂದ ಹಣ ಸಹಾಯ ಬಯಸಿದ್ದು, ನೆರವು ನೀಡುವವರು ಗಾಯತ್ರಿ ಅವರ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆ ಖಾತೆ ಸಂಖ್ಯೆ 0441108009233 ಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ಅಶೋಕ್ ಅವರ ಮೊ.9008212215 ಸಂಪರ್ಕಿಸಬಹುದು.

Leave a Comment

error: Content is protected !!