ಹೊಸನಗರ: ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿರುವ ಸಂತೆ ಮಾರ್ಕೆಟ್ ಸಾರ್ವಜನಿಕರಿಗೆ ಕೈ-ಕಾಲು ಮುರಿತಕ್ಕೆ ಆಹ್ವಾನ ನೀಡುವಂತಿದ್ದು ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಾವಿರಾರು ಜನರು ಸಂತೆ ಮಾರ್ಕೆಟ್ಗೆ ಆಗಮಿಸಿ ತಮಗೆ ಬೇಕಾಗಿರುವಂತಹ ತರಕಾರಿ, ಹಣ್ಣು-ಹಂಪಲುಗಳನ್ನು ತೆಗೆದುಕೊಂಡು ಹೋಗುವ ಪದ್ದತಿ ಎಂದಿನಂತೆ ನಡೆಯುತ್ತಿದೆ.
ಪ್ರತಿ ವರ್ಷ ಪಟ್ಟಣ ಪಂಚಾಯತಿಯು ಸಂತೆ ಮಾರುಕಟ್ಟೆ ರಿಪೇರಿಗಾಗಿ ಸಾಕಷ್ಟು ಹಣ ವ್ಯಯ ಮಾಡಲಾಗುತ್ತದೆ. ಅದೇ ರೀತಿ ಸಂತೆ ಶುಲ್ಕವನ್ನು ಅಂಗಡಿ ಮಾಲೀಕರಿಂದ ಪಟ್ಟಣ ಪಂಚಾಯತಿ ವಸೂಲಿ ಮಾಡುತ್ತಿದೆ. ಹೊಸನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿರುವುದರಿಂದ ಹಾಗೂ ಬಾಗಿಲಿನಲ್ಲಿ ಮಣ್ಣು ಹಾಕಿರುವುದರಿಂದ ಸಾರ್ವಜನಿಕರಿಗೆ ಓಡಾಟ ಮಾಡುವುದು ಕಷ್ಟಕರವಾಗಿದ್ದು ಮೇಲಿನಿಂದ ಜಾರಿ ಬಿದ್ದರೇ ಸಾರ್ವಜನಿಕರ ಕೈ-ಕಾಲು ಮುರಿಯೊದಂತು ಗ್ಯಾರಂಟಿಯಾಗಿದೆ.
ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ಅಧಿಕಾರಿ ವರ್ಗ ಮುಂದಿನ ಸಂತೆಯ ದಿನವಾದ ಶನಿವಾರದೊಳಗೆ ಸರಿಪಡಿಸಿದರೆ ಒಳ್ಳೆಯದು. ಇಲ್ಲವಾದರೇ ವ್ಯಾಪಾರಕ್ಕೆ ಬಂದ ಅಂಗಡಿ ಮಾಲೀಕರಿಗೆ ಹಾಗೂ ತರಕಾರಿ ತೆಗೆದುಕೊಂಡು ಹೋಗಲು ಬಂದ ಸಾರ್ವಜನಿಕರಿಗೆ ಏನಾದರೂ ಅನಾಹುತವಾದರೆ ಪಟ್ಟಣ ಪಂಚಾಯತಿಯೇ ನೇರ ಕಾರಣವಾಗಲಿದೆ.