ಕೆದಲುಗುಡ್ಡ ಶನೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1 ಲಕ್ಷ ರೂ. ಧನ ಸಹಾಯ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಇಲ್ಲಿಗೆ ಸಮೀಪದ ಕೆದಲುಗುಡ್ಡೆ ಶ್ರೀ ಶನೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರದಿಂದ ಒಂದು ಲಕ್ಷ ರೂ. ಕೊಡುಗೆಯಾಗಿ ನೀಡಲಾದ ಚೆಕ್‌ ಅನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ ವಿತರಿಸಿದರು.

ಈ ಸಂದರ್ಭದಲ್ಲಿ ಕೆದಲುಗುಡ್ಡೆ ಶ್ರೀಶನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಮತ್ತು ಸಮಿತಿಯ ಪದಾಧಿಕಾರಿಗಳು ಹಾಜರಿದ್ದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ನೀಡಲಾದ ಒಂದು ಲಕ್ಷ ರೂ. ಚೆಕ್‌ ಅನ್ನು ಸ್ವೀಕರಿಸಿದರು.

ಹೊಸನಗರ ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಪ್ರದೀಪ್ ಮತ್ತು ಮೇಲ್ವಿಚಾರಕ ನಟರಾಜ್ ಹಾಗೂ ಸಂಚಾಲಕರಾದ ಜಯಂತಿ, ವಸಂತ, ರಾಜೇಶ್ವರಿ, ಬಾಳೂರು ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ, ಹಿರಿಯಣ್ಣ, ಸೋಮಶೇಖರ ದೂನ, ಸಿ.ನಾಗರಾಜ, ಚಂದ್ರಶೇಖರ, ಗಣೇಶ, ಕೃಷ್ಣಮೂರ್ತಿ, ಷಣ್ಮುಖ ಕೆದಲುಗುಡ್ಡೆ, ಸಂದೀಪ, ಕೇತಾರ್ಜಿರಾವ್, ಮಲ್ಲೇಶ್ ಆಲವಳ್ಳಿ, ಮಂಜಪ್ಪ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಕೆದಲುಗುಡ್ಡೆ ಗ್ರಾಮಸ್ಥರು ಹಾಜರಿದ್ದರು.

Leave a Comment

error: Content is protected !!