ಶಿವಮೊಗ್ಗ : ಶಿವಮೊಗ್ಗದ ಹೆಸರಾಂತ ಹಿರಿಯ ಸಿವಿಲ್ ಇಂಜಿನಿಯರ್ ವಿ.ಟಿ. ಅನಂತಕೃಷ್ಣ (75) ಶನಿವಾರ ರಾತ್ರಿ ವಿಧಿವಶರಾದರು.
ಲೋಕೋಪಯೋಗಿ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ 2006ರಲ್ಲಿ ನಿವೃತ್ತಿಯಾಗಿದ್ದ ಇವರು ತೀರ್ಥಹಳ್ಳಿ ತಾಲೂಕಿನ ಅರಗ ಸಮೀಪದ ಮಿಟ್ಲುಗೋಡಿನವರಾಗಿದ್ದಾರೆ.
ಇವರ ಕರ್ತವ್ಯ ನಿಷ್ಠೆಗೆ ಶ್ರೀ ಆದಿಚುಂಚನಗಿರಿಯ ಚುಂಚನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಖ್ಯಾತ ವೈದ್ಯರಾದ ಪುತ್ರ ಡಾ. ವಿವೇಕ್, ಸೊಸೆ ಡಾ. ಪೂಜಾ, ಪುತ್ರಿ ವಿದ್ಯಾ ಮತ್ತು ಪತ್ನಿ ಪೂರ್ಣಿಮಾ ಅವರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳು ಮಾಜಿ ಗೃಹ ಸಚಿವ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.