ಶರ್ಮಣಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ !

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ : ಶರ್ಮಣಾವತಿ ನದಿಯಲ್ಲಿ (Sharmanavathi River) ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ವಾರಸುದಾರ ಪತ್ತೆಗೆ ಮನವಿ ಮಾಡಲಾಗಿದೆ.

ದೇವರಾಜ ಎಂ ಬಿನ್ ಮಂಜುನಾಥ ಎಂಬುವವರು ಗುರುವಾರ ದಿನ ಮಧ್ಯಾಹ್ನ ಸುಮಾರು 12-00 ಗಂಟೆ ಸುಮಾರಿಗೆ ತಮ್ಮ ತೋಟಕ್ಕೆ ಹುಲ್ಲು ಕೊಯ್ಯಲು ಹೋಗಿದ್ದು, ಆ ಸಮಯದಲ್ಲಿ ತೋಟದ ಪಕ್ಕದಲ್ಲಿ ಹಾದು ಹೋಗಿರುವ ಶರ್ಮಣಾವತಿ ನದಿ ದಂಡೆಯ ಹತ್ತಿರ ಹೋದಾಗ ನದಿಯ ಮಧ್ಯದಲ್ಲಿ ಒಂದು ಮೃತದೇಹ ಕಂಡಿದ್ದು, ತಕ್ಷಣ ಗ್ರಾಮ ಪಂಚಾಯ್ತಿಯ ಸದಸ್ಯರಾದ ಕರುಣಾಕರ ರವರಿಗೆ ವಿಚಾರ ತಿಳಿಸಿದ್ದು, ನಂತರ ಕರುಣಾಕರ ಮತ್ತು ಅಕ್ಕಪಕ್ಕದವರು ಸ್ಥಳಕ್ಕೆ ಬಂದು ನೋಡಿದ್ದು ಮೃತದೇಹದ ಮೇಲೆ ಕಪ್ಪು ಬಣ್ಣದ ಒಳಚಡ್ಡಿ ಮಾತ್ರ ಇದ್ದು, ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುತ್ತದೆ.

ಈ ಬಗ್ಗೆ ವಿಚಾರಿಸಿದಾಗ ಅವನ ಹೆಸರು ವಿಳಾಸ ತಿಳಿದಿರುವುದಿಲ್ಲ. ನಂತರ ಸ್ಥಳೀಯರೊಂದಿಗೆ ಮೃತದೇಹವನ್ನು ಎಳೆದು ತಂದು ನೋಡಿದಾಗ ಅದು ಪುರುಷನ ಮೃತದೇಹವಾಗಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಈ ವ್ಯಕ್ತಿಯು ಹೊಳೆಗೆ ಸ್ನಾನ ಮಾಡಲು ಹೋಗಿಯೋ ಅಥವಾ ಮೀನು ಹಿಡಿಯಲು ಬಂದೋ ಅಥವಾ ತಾನಾಗಿಯೋ ಬಿದ್ದು ನೀರಿನಿಂದ ಮೇಲೇಳಲಾಗದೇಯೋ ಮೃತಪಟ್ಟು ಹೊಳೆಯಲ್ಲಿ ತೇಲಿಕೊಂಡು ನಮ್ಮ ತೋಟದ ಹತ್ತಿರದ ಹೊಳೆಯಲ್ಲಿನ ಮಟ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ ಎಂದು ಹೊಸನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಯುಡಿಆರ್ ನಂ 11/2024 ಕಲಂ 174 (ಸಿ) ಸಿಆರ್ ಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.

ಅನಾಮದೇಯ ಗಂಡಸಿನ ಚಹರೆ ಗುರುತು ಮತ್ತು ವಿವರ :

ಸುಮಾರು 40 ರಿಂದ 45 ವರ್ಷ ವಯಸ್ಸು, 5.3 ಅಡಿ ಎತ್ತರ. ಸಾಧಾರಣ ಮೈಕಟ್ಟು ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಮೃತದೇಹವು ಊದಿಕೊಂಡಿದೆ. ಮೃತನು ಕಪ್ಪು ಬಣ್ಣದ CLIX Activa 80 cm ಎಂಬ ಲೇಬಲ್ ಇರುವ ಅಂಡರ್ ವೇರ್ ಧರಿಸಿದ್ದಾನೆ.

ಈ ಮೇಲ್ಕಂಡ ಅನಾಮದೇಯ ಗಂಡಸಿನ ಶವದ ವಾಸರುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ದೂರವಾಣಿ ಸಂಖ್ಯೆ 08182-261400, ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ದೂರವಾಣಿ ಸಂಖ್ಯೆ 08181-220388, ವೃತ್ತ ನಿರೀಕ್ಷಕರು ಹೊಸನಗರ ಮೃತ್ತ ಕಛೇರಿ ದೂರವಾಣಿ ಸಂಖ್ಯೆ 9480803337 ಅಥವಾ ಪಿಎಸ್‌ಐ ಹೊಸನಗರ ಪೊಲೀಸ್ ಠಾಣೆ ಶಿವಮೊಗ್ಗ ದೂರವಾಣಿ ಸಂಖ್ಯೆ 9480803364 ರವರಿಗೆ ತಿಳಿಸಲು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.

Leave a Comment

error: Content is protected !!