Ripponpete | ಮಂಗಳೂರಿನ ಕ್ಯಾಂಪ್ಕೊ ಮತ್ತು ಜೆ.ಕೆ.ಟ್ರೇಡರ್ಸ್ ರಿಪ್ಪನ್ಪೇಟೆ ಇವರ ಸಹಯೋಗದಲ್ಲಿ ಜೂನ್ 14 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಿಪ್ಪನ್ಪೇಟೆಯ ಹಿಂದೂ ಮಹಾಸಭಾ ಸಭಾಂಗಣದಲ್ಲಿ ಕ್ಯಾಂಪ್ಕೊ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಸಗಳ ಗೊಬ್ಬರ ಬಿಡುಗಡೆ ಸಮಾರಂಭ ಮತ್ತು ಸದಸ್ಯ ಬೆಳೆಗಾರರ ಸಭೆಯನ್ನು ಆಯೋಜಿಸಲಾಗಿದೆ ಎಂದು ಕ್ಯಾಂಪ್ಕೊ ನಿರ್ದೇಶಕ ಹೆಚ್.ಎಂ.ರಾಘವೇಂದ್ರ ತಿಳಿಸಿದ್ದಾರೆ.
ಈ ಸಮಾರಂಭದ ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ ಪರಮೇಶ ನೆರವೇರಿಸುವರು. ಕ್ಯಾಂಪ್ಕೊ ನಿಯಮಿತ ಅಧ್ಯಕ್ಷ ಎ.ಕಿಶೋರ್ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೊ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ಶಿಕಾರಿಪುರ ಶಾಮ್ಕೋಸ್ ಅಧ್ಯಕ್ಷ ಬಿ.ಚಂದ್ರಪ್ಪ ಹಾಗೂ ಕ್ಯಾಂಪ್ಕೊ ನಿರ್ದೇಶಕ ಹೆಚ್.ಎಂ.ರಾಘವೇಂದ್ರ ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.