ಹೊಸನಗರ ಮಲೆನಾಡು ಛಾಯಾಗ್ರಾಹಕ ಸಂಘದಿಂದ ಪದ್ಮಶ್ರೀ ಅನಾಥಾಶ್ರಮಕ್ಕೆ ಧನ ಸಹಾಯ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | 185ನೇ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಹೊಸನಗರ ತಾಲ್ಲೂಕು ಮಲೆನಾಡು ಛಾಯಾಗ್ರಾಹಕ ಸಂಘದ ವತಿಯಿಂದ ಚಿಕ್ಕಜೇನಿಯಲ್ಲಿರುವ ಪದ್ಮಶ್ರೀ ಅನಾಥಾಶ್ರಮಕ್ಕೆ ಛಾಯಾಗ್ರಹಕ ಸಂಘದ ಅಧ್ಯಕ್ಷ ದೀಪಕ್ ಸ್ವರೂಪ್‌ರವರ ನೇತೃತ್ವದಲ್ಲಿ ಧನ ಸಹಾಯ ನೀಡಲಾಯಿತು‌.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಸಂಘದ ಖಜಾಂಚಿ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸ್ವರೂಪ್, ತಾಲ್ಲೂಕು ಛಾಯಾಗ್ರಾಹಕ ಸಂಘದ ಗೌರವಾಧ್ಯಕ್ಷ ದಯಾನಂದಮೂರ್ತಿ, ತಾಲ್ಲೂಕು ಸಂಘದ ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಹರ್ಷ, ಗುರು, ದಿನೇಶ್, ನಾಗರತ್ನ, ಕಾರ್ತಿಕ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ರಾಷ್ಟ್ರ ಮಟ್ಟದ ಕರಾಟೆ, ನಿರಂಜನ್’ಗೆ ದ್ವಿತೀಯ ಸ್ಥಾನ

HOSANAGARA | ಉಡುಪಿಯ ಕಟಪಾಡಿ ಸುಭಾಷ್ ನಗರ ಕುರ್ಕಲನ ಥಂಡರ್ಸ್ ಗ್ರ್ಯಾಂಡ್ ಬೇ ಹಾಲಿನಲ್ಲಿ ನಡೆದ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ ಯಶಸ್ವಿಯಾಗಿ ನಡೆದಿದ್ದು 8-10 ವರ್ಷದ ವಯೋಮೀತಿ ಸ್ಪರ್ಧೆಯಲ್ಲಿ ಹೊಸನಗರದ ಸುಧಾಕರ್‌ರವರ ಪುತ್ರರಾದ ನಿರಂಜನ್ ಎಸ್ ದ್ವಿತೀಯ ಸ್ಥಾನ ಪಡೆದು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಅಭಿನಂದನೆ :

ನಿರಂಜನ್‌ ಸಾಧನೆಯನ್ನು ಕರಾಟೆ ಮಾಸ್ಟರ್ ರಾಘವೇಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಯೋಗಾಶ್ರಮದ ಗುರುಗಳಾದ ಸುಧಾಕರ್, ಬಿ.ಜಿ ಉಮೇಶ್ ಇನ್ನೂ ಮುಂತಾದವರು ಅಭಿನಂದಿಸಿದ್ದಾರೆ.

Leave a Comment

error: Content is protected !!