ಶಿವಮೊಗ್ಗ : ನಿನ್ನೆ ಸಂಜೆ ನಗರದಲ್ಲಿ ಲಷ್ಕರ್ ಮೊಹಲ್ಲದ ಮೀನು ಮಾರುಕಟ್ಟೆಯ ಬಳಿ ನಡೆದ ಆದಿಲ್ ಮತ್ತು ಯಾಸಿನ್ ಖುರೇಷಿ ನಡುವಿನ ಗ್ಯಾಂಗ್ವಾರ್ನಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಸಂದರ್ಭದಲ್ಲಿ ಆದಿಲ್ ಹಾಗು ಸಹಚರರು ಯಾಸಿನ್ ಖುರೇಷಿಗೆ ಮಾರಣಾಂತಿಕವಾಗಿ ಎದೆ ಹಾಗು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದರಿಂದ ಯಾಸಿನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ನಂತರದಲ್ಲಿ ರೊಚ್ಚಿಗೆದ್ದ ಯಾಸಿನ್ ಕಡೆಯ ಹುಡುಗರು ಆದಿಲ್ ಸಹಚರರ ಮೇಲೆ ಮಚ್ಚು ಬೀಸಿ ಕಲ್ಲು ಚಪ್ಪಡಿ ಕಲ್ಲು ಎತ್ತಿಹಾಕಿ ಇಬ್ಬರನ್ನು ಭೀಕರವಾಗಿ ಕೊಲೆಗೈದಿದ್ದರು.
ನಂತರದಲ್ಲಿ ಸ್ಥಳದಲ್ಲಿ ಕುಸಿದುಬಿದ್ದ ಯಾಸಿನ್ ಖುರೇಷಿಯನ್ನು ನಗರದ ಎನ್.ಹೆಚ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಯಾಸಿನ್ ಸಾವನ್ನಪ್ಪಿದ್ದಾನೆ.
ನಿನ್ನೆಯ ಮಾರಾಮಾರಿ ಪ್ರಕರಣದಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದ್ದು ತಲೆಮೆರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಈ ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.