ಮಳೆ ತಂದ ಅವಾಂತರ | ಮರ ಬಿದ್ದು ಪಾದಚಾರಿ ಮಹಿಳೆ ಸಾವು !

Written by Malnadtimes.in

Updated on:

  • ಮಳೆ ತಂದ ಅವಾಂತರ
  • ಮರ ಬಿದ್ದು ಪಾದಚಾರಿ ಮಹಿಳೆ ಸಾವು !
  • ಇನ್ನೊಂದೆಡೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಮೂವರ ಸ್ಥಿತಿ ಗಂಭೀರ !!
WhatsApp Group Join Now
Telegram Group Join Now

ಎನ್.ಆರ್.ಪುರ: ಭಾರಿ ಗಾಳಿ ಮಳೆಗೆ ಮರವೊಂದು ಮುರಿದು ಬಿದ್ದು ಮಹಿಳೆ ಮೃತಪಟ್ಟಿ ಘಟನೆ ತಾಲೂಕಿನ ಕಾನೂರು ಪಂಚಾಯತ್ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಲ್ಲಿ ನಡೆದಿದೆ ‌

ಕೊಪ್ಪ ಮೂಲದ ಸವಿತಾ (48) ಮೃತ ಮಹಿಳೆ. ಕೊಪ್ಪದಿಂದ ಕಟ್ಟಿನಮನೆ ಗ್ರಾಮದ ತಾಯಿ ಮನೆಗೆ ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂತಿರುಗುವ ವೇಳೆ ಗಾಳಿ ಮಳೆಯಿಂದ ಮರಬಿದ್ದು ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಅದೇ ಜಾಗದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದರಿಂದ ಕಾರಿನಲ್ಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿವೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಗಾಯಾಳುಗಳನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಮಾಜಿ ಸಚಿವ ಜೀವರಾಜ್ ಡಿ. ಎನ್. ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಮೃತ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರದ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಶೀಘ್ರವೇ ಪರಿಹಾರ ನೀಡುವಂತೆ ತಿಳಿಸಿದ್ದಾರೆ.

ಈ ಸಾವಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ.

Leave a Comment

error: Content is protected !!