ಹೊಸನಗರ ಹೆಚ್.ಕೆ. ಸುಬ್ಬರಾವ್ ನಿಧನ !

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಇಲ್ಲಿನ ಹೆಚ್.ಕೆ. ಸುಬ್ಬರಾವ್‌ (90) ವಯೋಸಹಜ ಅನಾರೋಗ್ಯದಿಂದ ಪಟ್ಟಣ ಪಂಚಾಯತಿಯ  10ನೇ ವಾರ್ಡ್‌ನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು ಈ ಹಿಂದೆ ರಕ್ಷತಾ ಫೈನಾನ್ಸ್ ಹಾಗೂ ಮಂಜುನಾಥ್ ಫೈನಾನ್ಸ್ ಸಹಬಾಹಗಿತ್ವದಲ್ಲಿ ಮಾಲೀಕರಾಗಿದ್ದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಹೊಸನಗರದ ಮಾರಿಕಾಂಬ ದೇವಸ್ಥಾನದ ಏಳಿಗೆಗೆ ಶ್ರಮಿಸಿದ್ದರು.

ಪ್ರಗತಿಪರ ರೈತರೂ ಸಹ ಆಗಿದ್ದ ಇವರಿಗೆ ಹೆಚ್.ಎಸ್ ಗಿರೀಶ್ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ, ಕಾಂಗ್ರೆಸ್ ಮುಖಂಡ ಹೆಚ್ ಮಹಾಬಲರಾವ್ ಸೇರಿದಂತೆ ಪತ್ನಿ, ಸೊಸೆ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಸಂತಾಪ:

ಇವರ ನಿಧನಕ್ಕೆ ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಹಾಗೂ ನಿರ್ದೇಶಕ ಸದಸ್ಯರುಗಳು ಹೆಚ್. ಮಹಾಬಲರಾವ್, ಬಾಬುರಾವ್, ಮನೋಹರ, ಗೋಪಾಲ್, ಹೆಚ್.ಎನ್ ನಾಗರಾಜ್, ಹೆಚ್.ಎಸ್. ದಿನೇಶ, ಹೆಚ್.ಎಸ್ ಹರೀಶ, ಕಟ್ಟೆ ಸುರೇಶ್ ಹೆಚ್.ಎಂ. ರಾಮಕೃಷ್ಣ, ಟಿ.ಆರ್ ಸುನೀಲ್ ಕುಮಾರ್, ನಾರಾಯಣ ಎಂ.ಪಿ.ಎಂ, ಎನ್ ದತ್ತಾತ್ರೇಯ ಉಡುಪ, ನಾಗರಕೊಡಿಗೆ ಸುಬ್ಬಾರಾವ್, ಜೇನಿ ವಾಸುದೇವ, ಸ್ವಾಮಿ, ಜಿ.ಟಿ ಈಶ್ವರಪ್ಪ ಗೌಡ, ನಿವೃತ್ತ ಎ.ಸಿ.ಎಫ್ ಮಂಜುನಾಥ್, ಗುತ್ತಿಗೆದಾರರಾದ ಮಹಾಬಲ, ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.

Leave a Comment

error: Content is protected !!