HOSANAGARA | ತಾಲೂಕಿನ ನಿಟ್ಟೂರಿನಲ್ಲಿ ನಡೆದ ಕಾಂಗ್ರೆಸ್ ಘಟಕದ ಸಭೆಯಲ್ಲಿ ಇತ್ತೀಚಿಗೆ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಗೆ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಸ್ಥಳೀಯ ಕಾಂಗ್ರೆಸ್ ಘಟಕ ಅಧ್ಯಕ್ಷ ನಾಗೇಂದ್ರ ಜೋಗಿ ಅವರನ್ನು ಘಟಕದ ಸದಸ್ಯರು ಅಭಿನಂದಿಸಿದರು.
ನಾಮನಿರ್ದೇಶನಕ್ಕೆ ಕಾರಣೀಭೂತರಾದ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ನಗರ ಹೋಬಳಿ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಮಣ್ಯ ಸೇರಿದಂತೆ ಹಲವರಿಗೆ ಘಟಕದ ಅಭಿನಂದನೆ ಸಲ್ಲಿಸಿತು.
ಈ ವೇಳೆ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯರಾದ ನಾಗೋಡಿ ವಿಶ್ವನಾಥ್, ಚಂದಯ್ಯ ಜೈನ, ಶೋಭಾ ಉದಯ್ ಕುಮಾರ್, ಯಶೋದಮ್ಮ ರಾಘವೇಂದ್ರ ಆಚಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಂಜಪ್ಪ ಬೆನ್ನಟ್ಟೆ, ನಿಟ್ಟೂರು ಬೂತ್ ಸಮಿತಿಯ ಅಧ್ಯಕ್ಷ ಜೆ.ವಿ. ಸುಬ್ರಹ್ಮಣ್ಯ, ಕೆ. ಬಿ. ಸರ್ಕಲ್ ಭೂತ್ ಸಮಿತಿಯ ಅಧ್ಯಕ್ಷ ಓಂಕಾರ್ ತೋರಗೋಡು, ಪಿಎಸಿಎಸ್ ನಿಟ್ಟೂರಿನ ಉಪಾಧ್ಯಕ್ಷ ರವೀಂದ್ರ ಚನ್ನಪ್ಪ, ಉದಯ್ ಪೂಜಾರಿ, ಯುವ ಮುಖಂಡ ಕುಂಬ್ಳೆ ರಾಘು ಮೊದಲಾದವರು ಉಪಸ್ಥಿತರಿದ್ದರು.