HOSANAGARA | ಇನ್ನೂ ನಾಲ್ಕು ವರ್ಷಗಳಲ್ಲಿ ಹೊಸನಗರ ಪಟ್ಟಣದಲ್ಲಿರುವ ಎಲ್ಲ ಶಾಲೆ, ಕಾಲೇಜ್ಗಳನ್ನು ದುರಸ್ಥಿ ಪಡಿಸುವುದರ ಜೊತೆಗೆ ಕೆಲವು ಶಾಲೆಗಳನ್ನು ಸರ್ಕಾರಿ ಕಟ್ಟಡಗಳನ್ನು ಹೊಸ ವಿನ್ಯಾಸದೊಂದಿಗೆ ರೂಪುಗೊಳಿಸುವ ಜವಾಬ್ದಾರಿ ನನ್ನ ಮೇಲಿದ್ದು ಅವುಗಳನ್ನು ಪೂರ್ಣಗೊಳಿಸುತ್ತೇವೆ ಹಾಗೂ ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ಹೊಸನಗರ-ಸಾಗರ ಶಾಸಕರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುಮಾರು ಅಂದಾಜು 1 ಕೋಟಿ ರೂ.ನಷ್ಟು ಕಾಲೇಜು ಕೊಠಡಿಗಳ ನಿರ್ಮಾಣ ಕಾರ್ಯಕ್ರಮದ ಶಿಲಾನ್ಯಾಸ ಕಾರ್ಯಕ್ರಮವನ್ನು ಕಾಲೇಜ್ ಅಭಿವೃದ್ಧಿ ಮಂಡಳಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಸಹಭಾಗಿತ್ವದಲ್ಲಿ ಶಿಲಾನ್ಯಾಸ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಹೊಸನಗರ-ಸಾಗರ ಕ್ಷೇತ್ರದ ಶಾಸಕನಾಗಿ 1 ವರ್ಷ ನಾಲ್ಕು ತಿಂಗಳು ಕಳೆದಿದೆ ಇಲ್ಲಿಯವರೆಗೆ ರಸ್ತೆ ಅಂಗನವಾಡಿ ಕಟ್ಟಡ, ಶಾಲೆಗಳ ದುರಸ್ಥಿ ರಸ್ತೆ ಹಾಗೂ ನೆರೆ ಪರಿಹಾರಗಳನ್ನು ಸರ್ಕಾರ ಹಾಗೂ ನನ್ನ ಸ್ವಂತ ಹಣವನ್ನು ನೀಡಿದ್ದೇವೆ. ಮುಂದಿನ ನಾಲ್ಕು ವರ್ಷ ಯಾರೂ ಮಾಡಿರದ ರೀತಿಯಲ್ಲಿ ಹೊಸನಗರ ತಾಲ್ಲೂಕು ಅಭಿವೃದ್ಧಿ ಪಡಿಸುವುದೆ ನನ್ನ ಗುರಿಯಾಗಿದೆ ಎಂದರು.
ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್, ತಹಶೀಲ್ದಾರ್ ರಶ್ಮಿ ಹಾಲೇಶ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಕೆಡಿಪಿ ಉಪಾಧ್ಯಕ್ಷ ಎಂ.ಪಿ ಸುರೇಶ, ಅಶ್ವಿನಿಕುಮಾರ್, ಗಗ್ಗ ಬಸವರಾಜ್ ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.