HOSANAGARA | ಆ. 19 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊಸನಗರ ಹಾಗೂ ಡಾ|| ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಯಳಗಲ್ಲು ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಗಳಿಗೆ ಗೇರುಪುರ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ(ಪ.ಜಾ-273) ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ಯಾರ್ಥಿಗಳಾದ ವರ್ಷ ಎ, ಭಾಗೀರಥಿ ಬಿ ಆರ್, ಸೌಜನ್ಯ ಬಿ, ಸೌಂದರ್ಯ, ನಿಶಾಂತ್ ಎಸ್ ನಾಯ್ಕ, ಮಣಿಕಂಠ ನಾಯ್ಕ, ಕುಶಾಲ್, ನಿಖಿತಾ ಬಿ ಆರ್, ಶೃತಿ ಹೆಚ್. ಎಸ್, ಸುಶ್ಮಿತಾ, ದೀಕ್ಷಾ ಆರ್.ವೈ, ವಿಜಯಕುಮಾರ್ ಎನ್, ಶರಣ್ ನಾಯ್ಕ, ರಾಹುಲ್ ಕೆ ಆರ್, ಶಶಾಂಕ್ ಒಟ್ಟು 15 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರು ವಸತಿ ಶಾಲೆಗೆ ಹಾಗೂ ಹೊಸನಗರ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ವಸತಿ ಶಾಲೆಯ ದೈಹಿಕ ಶಿಕ್ಷಕ ಜಗದೀಶ್ ಹೆಚ್ ಇವರಿಗೆ ಶಾಲೆಯ ಎಲ್ಲಾ ಸಿಬ್ಬಂದಿಗಳ ಹಾಗೂ ಪೋಷಕರ ಪರವಾಗಿ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳ ಪರವಾಗಿ ಪ್ರಾಂಶುಪಾಲ ಚಂದ್ರಶೇಖರ್ ಎಂ ಪಿ ಇವರು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.