ಜಲಪಾತ ನೋಡಲು ಬಂದಿದ್ದ ಪ್ರವಾಸಿಗ ಕಾಲುಜಾರಿ ಬಿದ್ದು ನೀರುಪಾಲು !

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದಲ್ಲಿ (Abbi Falls) ನಡೆದಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ 12 ಜನ ಯುವಕರು ಅಬ್ಬಿ ಜಲಪಾತ ನೋಡಲು ಇಂದು ಮಧ್ಯಾಹ್ನ ಬಂದಿದ್ದಾರೆ. ಅಧಿಕ ಮಳೆಯ ಸಂಬಂಧ ಯಾರೂ‌ ಹೋಗದಂತೆ ಕಂದಕ ಹೊಡೆಯಲಾಗಿದೆ. ಇದನ್ನೂ ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದಾರೆ. ಮಳೆಯಿರುವುದರಿಂದ ನೀರಿಗೆ ಇಳಿದ ಯುವಕರಲ್ಲಿ ಬಳ್ಳಾರಿ ಮೂಲದ ವಿನೋದ್ (26) ನೀರು ಪಾಲಾಗಿದ್ದಾನೆ.

ನೀರುಪಾಲಾಗುವ ಮುನ್ನ ತೆಗೆದ ಫೋಟೋ

ಅಧಿಕ ಮಳೆಯಿಂದಾಗಿ ಬಂಡೆಗಳ ಮೇಲೆ ಪಾಚಿ ಇದ್ದದ್ದರಿಂದ ಕಾಲು ಜಾರಿ ನೀರುಪಾಲಾಗಿರುವುದು ತಿಳಿದು ಬಂದಿದೆ. ಈತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವುದಾದಿ ತಿಳಿದುಬಂದಿದೆ‌.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಭೇಟಿ ನೀಡಿದ್ದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ‌‌.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Comment

error: Content is protected !!