Ripponpete | ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್ ಆಚರಣೆ

Written by Malnadtimes.in

Published on:

WhatsApp Group Join Now
Telegram Group Join Now

Ripponpete | ಇಲ್ಲಿನ ಜುಮ್ಮಾ ಮಸೀದಿ ಮತ್ತು ಮೆಕ್ಕಾ ಮಸೀದಿಯಲ್ಲಿ ತ್ಯಾಗ, ಬಲಿದಾನದ ಪ್ರತೀಕವಾದ ಈದ್‌ಉಲ್ ಆಝಾ (ಬಕ್ರೀದ್) ವನ್ನು ಆಚರಿಸಿದರು.

ಇಬ್ರಾಹಿಂ ಅವರು ಪ್ರವಾದಿ ಮಹಮದ್ ಅವರಿಗಿಂತ ಸುಮಾರು 2500 ಸಾವಿರ ವರ್ಷದ ಹಿಂದೆ ಜನಿಸಿದ ಪ್ರವಾದಿಯಾಗಿದ್ದು ಪವಿತ್ರ ಖುರಾನ್‌ನಲ್ಲಿ ಹೇಳಿರುವಂತೆ ಪ್ರವಾದಿ ಇಬ್ರಾಹಿಂ ದಂಪತಿಗಳಿಗೆ ತಮ್ಮ ಇಳಿ ವಯಸ್ಸಿನಲ್ಲಿ ಒಬ್ಬ ಮಗ ಜನಿಸುತ್ತಾನೆ. ಆದರೆ ಅಲ್ಲಾಹು ಇವರಿಗೆ ಅಗ್ನಿ ಪರೀಕ್ಷೆಗೆ ಒಳಪಡಿಸಿದನ್ನು ಒಮ್ಮೆ ಅಲ್ಲಾಹನು ಕನಸಿನಲ್ಲಿ ಇಬ್ರಾಹಿಂ ಬಳಿ ಇರುವ ಯಾವುದಾದರೂ ಅತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ರೂಪದಲ್ಲಿ ಅರ್ಪಿಸುವಂತೆ ಆದೇಶಿಸುತ್ತಾನೆ. ಕನಸು ಬಿದ್ದ ಬಳಿಕೆ ಅನೇಕ ದಿನಗಳ ಕಾಲ ಪ್ರವಾದಿ ಇಬ್ರಾಹಿಂರವರಿಗೆ ಇದು ಭಾದಿಸುತ್ತಿತ್ತು. ಬಳಿಕ ಕನಸಿನ ಕುರಿತು ತನ್ನ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಸಾಕಷ್ಟು ಚರ್ಚೆ ಬಳಿಕೆ ಇಬ್ರಾಹಿಂ ದಂಪತಿಗಳು ತಮ್ಮ ಓರ್ವ ಪ್ರೀತಿಯ ಮಗನನ್ನು ಅಲ್ಲಾಹುವಿಗೆ ಬಲಿ ನೀಡಲು ನಿರ್ಧರಿಸುತ್ತಾರೆ. ಮಗ ಇಸ್ಮಾಯಿಲ್ ಸಹ ಏನನ್ನೂ ಯೋಚಿಸದೇ ಕೂಡಲೇ ಒಪ್ಪಿಗೆ ನೀಡುತ್ತಾನೆ. ಕೊನೆಗೆ ಇಬ್ರಾಹಿಂ ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾನೆ. ಈ ವೇಳೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಅಲ್ಲಾಹುನನ್ನು ನೆನೆದು ಭಕ್ತಿಯಿಂದ ಮಗನನ್ನು ತ್ಯಾಗ ಮಾಡಲು ಇಬ್ರಾಹಿಂ ಮುಂದಾಗುತ್ತಾರೆ. ಮಗನ ಕುತ್ತಿಗೆಗೆ ಕತ್ತಿಯನ್ನಿಟ್ಟು ಕತ್ತರಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲಾಹನ್ನು ಪ್ರವಾದಿ ಇಬ್ರಾಹಿಂರ ಭಕ್ತಿ ನಂಬಿಕೆ ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಇಸ್ಮಾಯಿಲ್ ಬದಲಿಗೆ ಅಲ್ಲಾಹುವಿನ ಕಡೆಯಿಂದ ಒಂದು ಕುರಿ ಅನುಗ್ರಹವಾಗಿ ಬಲಿದಾನವಾಗುತ್ತದೆ ಹೀಗಾಗಿ ಈ ಹಬ್ಬವನ್ನು ತ್ಯಾಗ-ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತದೆಂದು ರಿಪ್ಪನ್‌ಪೇಟೆ ಜುಮ್ಮಾ ಮಸೀದಿಯ ಧರ್ಮ ಗುರುಗಳು ಪ್ರವಚನದ ಮೂಲಕ ಸಮಾಜ ಭಾಂದವರಿಗೆ ಬೋಧನೆ ಮಾಡಿದರು.

ಮಸೀದಿಯಿಂದ ಮೆರವಣಿಗೆ ಮೂಲಕ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಇಲ್ಲಿನ ಮೂರು ಮಸೀದಿಯ ಧರ್ಮಗುರುಗಳು ಹಾಗೂ ಮಸೀದಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜ ಮುಖಂಡರು ಪಾಲ್ಗೊಂಡು ಮೆರವಣಿಗೆಯಲ್ಲಿ ತೆರಳುತ್ತಿದ್ದು ವಿಶೇಷವಾಗಿತ್ತು.


ಎಂ.ಬಿ.ಭಾನುಪ್ರಕಾಶ್ ನಿಧನಕ್ಕೆ ಕೋಣಂದೂರು ಶ್ರೀಗಳ ಸಂತಾಪ

Ripponpete | ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸೇವಕರು ಬಿಜೆಪಿ ಹಿರಿಯ ನಾಯಕರಲ್ಲಿ ಒಬ್ಬರು. ರಾಜ್ಯ ಪ್ರಕೋಷ್ಠಗಳ ಸಂಯೋಜಕಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಪಕ್ಷದ ಶಿಸ್ತಿನ ಶಿಪಾಯಿಯಾಗಿ ಕಾರ್ಯನಿರ್ವಹಿಸಿದ ಮಾಜಿ ಎಂ.ಎಲ್.ಸಿ ಎಂ.ಬಿ.ಭಾನುಪ್ರಕಾಶ ಇವರ ಅಕಾಲಿಕ ನಿಧನದಿಂದ ತುಂಬಲಾದ ನಷ್ಟ ಉಂಟಾಗಿದೆ ಎಂದು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಮಾಜಿ ಎಂ.ಎಲ್.ಸಿ. ಎಂ.ಬಿ.ಭಾನುಪ್ರಕಾಶ ಇವರ ಅಕಾಲಿಕ ನಿಧನಕ್ಕೆ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರ ಅತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಮೃತ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.

Leave a Comment

error: Content is protected !!