ರಿಪ್ಪನ್ಪೇಟೆ : ಸರ್ಕಾರಿ ಬಸ್ಗೆ (KSRTC) ಬೈಕ್ (Bike) ಡಿಕ್ಕಿಯಾಗಿ (Accident) ಮೂವರು ಗಂಭೀರವಾಗಿ (Injured) ಗಾಯಗೊಂಡ ಘಟನೆ ಇಂದು ಬೆಳಗ್ಗೆ ಕೋಡೂರು (Kodur) ಬಳಿಯ ಶಾಂತಪುರದಲ್ಲಿ ನಡೆದಿದೆ.
ಗಾಯಾಳುಗಳನ್ನು ಕೋಡೂರು ಗ್ರಾಪಂ ವ್ಯಾಪ್ತಿಯ ಮತ್ತಿಘಟ್ಟ ನಿವಾಸಿಗಳಾದ ಯಶವಂತ್, ಲೋಕೇಶ್ ಮತ್ತು ಶಶಿಕುಮಾರ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 6:30ರ ಸುಮಾರಿಗೆ ಬಾವಿ ಕೆಲಸಕ್ಕೆಂದು ಬೈಕಿನಲ್ಲಿ ತೆರಳುತ್ತಿದ್ದಾಗ ಹೊಸನಗರ ಕಡೆಯಿಂದ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಸರ್ಕಾರಿ ಬಸ್ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.
ಈ ಘಟನೆಯಲ್ಲಿ ಬೈಕ್ ಸವಾರರಲ್ಲಿ ಓರ್ವನ ಕಾಲು ತುಂಡಾಗಿದ್ದು ಮತ್ತಿಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಸಂಬಂಧ ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More
ಮಳೆ ಬಾರದಕ್ಕೆ ಮೌಢ್ಯದ ಮೊರೆ ಹೋದರು, ಹೂತಿದ್ದ ಶವ ಹೊರತೆಗೆದು ಸುಟ್ಟ ಗ್ರಾಮಸ್ಥರು !