ರಿಪ್ಪನ್ಪೇಟೆ : ಗುರುವಾರದಂದು ಶಿವಮೊಗ್ಗ ಜೆ.ಎನ್.ಎನ್. ಸಿ. ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ನಡೆಸಿದ ಉತ್ಥಾನ 2024ರ 16 ತಂಡಗಳು ಭಾಗವಹಿಸಿದ ವಾಲಿಬಾಲ್ ಪಂದ್ಯಾವಳಿಯಲ್ಲಿ ರಿಪ್ಪನ್ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಪಟುಗಳು ಭಾಗವಹಿಸಿ ಚಾಂಪಿಯನ್ಶಿಪ್ ಪಡೆದಿದ್ದಾರೆ.
ಭಾಗವಹಿಸಿದ ಆಶ್ರಯ್, ಆದರ್ಶ ಎಸ್, ಅನಿಲ್, ವಿಕಾಸ್ ಎಸ್, ವಿನಯ್ ಆರ್, ಅಭಿಷೇಕ ಆರ್.ಸಿ, ಪ್ರತಾಪ ಟಿ. ಮತ್ತು ನೂತನ್ ಹೆಚ್.ಸಿ ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ.ಟಿ, ದೈಹಿಕ ಶಿಕ್ಷಣ ನಿರ್ದೇಶಕ ಕುಮಾರಸ್ವಾಮಿ. ಕೆ. ಸಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನೆ ತಿಳಿಸಿದ್ದಾರೆ.