ಕಾಡು ಕುರಿ ಮತ್ತು ಕಬ್ಬೆಕ್ಕು ಬೇಟೆಯಾಡಿದ್ದ ಇಬ್ಬರ ಬಂಧನ !

Written by Malnadtimes.in

Published on:

WhatsApp Group Join Now
Telegram Group Join Now

SAGARA | ಕಾಡು ಕುರಿ ಮತ್ತು ಕಬ್ಬೆಕ್ಕು ಬೇಟೆಯಾಡಿದ್ದ ಇಬ್ಬರ ಆರೋಪಿಗಳನ್ನು ಅರಣ್ಯಾಧಿಕಾರಿ ಬಂಧಿಸದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬ್ರಹ್ಮಣಕೊಪ್ಪ ಗ್ರಾಮದ ಮರಾಠಿಕೆರೆ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗಿನಜಾವ ಸುಮಾರು 3:30ರ ಸುಮಾರಿಗೆ ಶರಾವತಿ ಕಣಿವೆ ಸಿಂಘಳಿಕ ಅಭಯಾರಣ್ಯ ವ್ಯಾಪ್ತಿಯ, ಕಾರ್ಗಲ್ ವಲಯದ ಮುಪ್ಪಾಣೆ ಶಾಖೆಯ ಅರಳಗೋಡು ಗಸ್ತಿನ ಬ್ರಹ್ಮಣಕೊಪ್ಪ ಗ್ರಾಮದ ಮರಾಟಿಕೆರೆ (Hamlight) ವ್ಯಾಪ್ತಿಯಲ್ಲಿ ಒಂದು ಕಾಡು ಕುರಿ ಹಾಗು ಕಬ್ಬೆಕ್ಕು ಬೇಟೆಯಾಡಿಕೊಂಡು ಬರುವಾಗ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ‌.

ವಿನಾಯಕ ಬಿನ್ ನಾರಾಯಣ ಮತ್ತು ಲೋಕೇಶ ಬಿನ್ ಭೀಮನಾಯಕ ಬಂಧಿತ ಆರೋಪಿಗಳಾಗಿದ್ದು ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Comment

error: Content is protected !!