Mudigere | ಮರ ಕಡಿಯುವಾಗ ಮರ (Tree) ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ (20) ಮೃತ ದುರ್ಧೈವಿ. ಟಿಂಬರ್ ಕಡೆಯಲು ಕೇರಳದಿಂದ ಅಪ್ಪ-ಮಗ ಬಂದಿದ್ದರು ಎನ್ನಲಾಗಿದೆ.
ಅಪ್ಪ ಮರ ಕತ್ತರಿಸುತ್ತಿದ್ದು, ಈ ವೇಳೆ ಮಗ ಕೆಳಗೆ ನಿಂತಿದ್ದ. ಈ ವೇಳೆ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಅವರ ಮೇಲೆ ಬಿದ್ದ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.