Karnataka Rain | ರಾಜ್ಯಕ್ಕೆ ಮುಂಗಾರು (Monsoon) ಶೀಘ್ರ ಪ್ರವೇಶವಾಗಲಿದ್ದು, ಜೂನ್ 2ರಂದು ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ (Heavy Rain) ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕರ್ನಾಟಕಕ್ಕೆ ಮುಂದಿನ 48 ಗಂಟೆಗಳಲ್ಲಿ ಮುಂಗಾರು ಪ್ರವೇಶವಾಗಲಿದ್ದು ಜೂನ್ 2ರಿಂದ ರಾಜ್ಯದೆಲ್ಲೆಡೆ ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಪ್ಪಳ (Koppala), ರಾಯಚೂರು (Rayachuru), ವಿಜಯಪುರ (Vijayapura), ಯಾದಗಿರಿ (Yadagiri), ಬೆಂಗಳೂರು ಗ್ರಾಮಾಂತರ (Bangalore Rural), ಬೆಂಗಳೂರು ನಗರ (Bangalore Urban), ಚಿಕ್ಕಬಳ್ಳಾಪುರ (Chikkaballapura), ಕೊಡಗು (Kodagu), ಕೋಲಾರ (Kolar), ಮಂಡ್ಯ (Mandya), ಮೈಸೂರು (Mysore), ರಾಮನಗರ (Ramanagara), ಶಿವಮೊಗ್ಗ (Shivamogga) ಮತ್ತು ತುಮಕೂರು (Thumakuru) ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ಎರಡು ದಿನ ಒಣಹವೆ ಇರಲಿದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದಲೇ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.