ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಚಾಲಕ ಸಾವು !

Written by Malnadtimes.in

Published on:

WhatsApp Group Join Now
Telegram Group Join Now

ಚಿಕ್ಕಮಗಳೂರು : ನಿಯಂತ್ರಣ ತಪ್ಪಿದ ಕಾರೊಂದು (Car) ಕೆರೆಗೆ ಬಿದ್ದ ಪರಿಣಾಮ, ಕಾರಿನೊಳಗೆ ಸಿಲುಕಿದ ಚಾಲಕ ಮೃತಪಟ್ಟ (Death) ಘಟನೆ ಅಂಬಳೆ (Ambale) ಎಂಬಲ್ಲಿ ಗುರುವಾರ ನಡೆದಿದೆ.

ಮೃತ ಚಾಲಕನನ್ನು ಅಂಬಳೆ ಗ್ರಾಮದ ದಿನೇಶ್ (33) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಹೇಗಾಯ್ತು ಘಟನೆ ?

ದಿನೇಶ್‌ ಕಾರು ಓಡಿಸುತ್ತಿದ್ದರು. ಅವರು ಅಂಬಳೆ ಗ್ರಾಮಕ್ಕೆ ಹೋಗಬೇಕಿತ್ತು. ಗ್ರಾಮಕ್ಕೆ ಮುಂಚೆ ಅದೇ ಗ್ರಾಮದ ಕೆರೆಯ ಕಟ್ಟೆ ಮೇಲೆ ರಸ್ತೆ ಇದ್ದು ಆ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿದೆ. ಇದರಿಂದಾಗಿ ನೀರಿಗೆ ಉರುಳಿದೆ.

ಡ್ರೈವಿಂಗ್‌ ಸೀಟ್‌ನಲ್ಲಿದ್ದ ದಿನೇಶ್‌ ಕಾರಿನಿಂದ ಹೊರಬರಲು ಸಾಧ್ಯವಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಜೊತೆಗಿದ್ದ ಸಂತೋಷ್‌ ಅಪಾಯದಿಂದ ಪಾರಾಗಿ ಬಂದಿದ್ದಾರೆ. ಇಬ್ಬರೂ ಅಂಬಳೆ ಗ್ರಾಮದವರೇ ಎಂದು ತಿಳಿದುಬಂದಿದೆ

ಅಗ್ನಿಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಗಿದೆ.

ಈ ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!