ಸಾಗರ : ಎರಡು ಬೈಕ್ಗಳ (Bike’s) ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ (Accident) ಯುವಕನೋರ್ವ ಸಾವನ್ನಪ್ಪಿರುವ (Death) ಘಟನೆ ತಾಲೂಕಿನ ಬಸವನಹೊಳೆ (Basavanahole) ಬಳಿ ಇಂದು ನಡೆದಿದೆ.
ಮೃತನನ್ನು ಆನಂದಪುರ ಮೂಲದ ಫೋಟೋಗ್ರಾಫರ್ ಅರುಣ್ (30) ಎಂದು ಗುರುತಿಸಲಾಗಿದೆ.
ಸಾಗರದಿಂದ ಆನಂದಪುರ ಕಡೆ ತೆರಳುತ್ತಿದ್ದ ಅರುಣ್ ರವರ ಬೈಕ್ ಹಾಗೂ ಆನಂದಪುರದಿಂದ ಸಾಗರದ ಕಡೆ ತೆರಳುತ್ತಿದ್ದ ಇನ್ನೊಂದು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಈತನನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇನ್ನೊಂದು ಬೈಕ್ ಸವಾರನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.